ಸರಣಿ ದೀಪಗಳೊಳಗೆ ಪ್ರಜ್ವಲಿಸೋ
ಕಿರಣಗಳು ಅಳಿಸುತ್ತಿವೆ ಅಂಧಕಾರವ;
ನಗೆ ಬೀರಿ ತೇಲಾಡುವ ಜ್ಯೋತಿಗಳು
ಕಿರಣಗಳು ಅಳಿಸುತ್ತಿವೆ ಅಂಧಕಾರವ;
ನಗೆ ಬೀರಿ ತೇಲಾಡುವ ಜ್ಯೋತಿಗಳು
ಸಾರುತ್ತಿವೆ ಪಡೆನೀನೆಂದೂ ಹರುಷವ !
ಮೊದಲೊಂದು ದಿನ ಮಡಿ, ತೈಲ ಮಜ್ಜನ
ಹೊಸಯುಡುಗೆಯುಟ್ಟು ಮಿರಮಿರಿಸೋ ದಿನ
ನರಕಾಸುರನಂತಾಗದಿರೆಂದು ಕೃಷ್ಣ ಜಗಕೆ
ಸಾರಿದುದನ್ನ ಮರೆಯದೆ ಮೆರೆವ ಸುದಿನ
ನಡುವಿನದು ಹಬ್ಬ, ಕೆಟ್ಟ ಅಮಾವಾಸ್ಯೆಯಲ್ಲ
ನೀಗಿದ ಹರಿ ಜಗಕೆ ಅರುಹಿದ ಒಲವಿನಲಿ
ತನ್ನರಸಿ ಲಕುಮಿಯ ಪೂಜಿಸಿರೆಂದು ಸಾರಿ
ಮಾರನೆಯ ಮುಂಜಾನೆ ಗೋವು ಆರಾಧನೆ
ಶೃಂಗರಿಸಿ ಪೊಡಮಟ್ಟು, ಮೆರವಣಿಗೆ ಮಾಡಿ;
ಬಲೀಂದ್ರನ ಕರೆದು, ಸ್ಮರಿಸಿ ಭಕ್ತಿಯೊಳು
ಹೊಸತನದಿ ಮೆರೆವ ಸಂಭ್ರಮದ ದಿವಸ !
ಮೂರುದಿನಗಳ ಮಜ್ಜನ ನೀಗುವುದು
ಕಳೆದ ಮುನ್ನೂರು ದಿನಗಳ ಕೊಳೆತನ;
ಹರುಷ ಉಕ್ಕಿ ಬರಲೊಂದು ಸಾಕು
ಮನೆಯವರ ಉತ್ಸಾಹ, ಉಲ್ಲಾಸ, ಸ್ಪಂದನ !
ಹಬ್ಬವಿದು ನೂತನ, ಹೊಸತನದ ಸಂಕಲನ
ಕಲೆತು-ಬೆರೆತು ಬಾಳೆಂದು ಸದಾ ಸಾರುತ್ತಿರುವ
ತಮವನಳಿಸಿ ಸುಜ್ಞಾನ ದೀವಿಗೆ ಬೆಳೆಸುವ
ದೀಪಗಳು ಸಾಲು ಸಾಲಿನಲ್ಲಿ ನಗುವ ದೀಪಾವಳಿ !!
ಹಬ್ಬವು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ. ಆಚರಣೆ ಸವಿವರವಾಗಿದೆ.
ReplyDeleteಆದರೂ, 11 November 2012 ರಿಂದ ಬ್ಲಾಗ್ ಖಾಲೀ ಬಿಟ್ಟಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಬ್ಲಾಗ್ ಖಾಲೀ ಬಿಡುವುದು ಮತ್ತು ಜೋಬಿನಲ್ಲಿ ಪ್ರೇಮ ಪತ್ರವಿದ್ದರೂ ನಲ್ಲೆಗೆ ಕೊಡದಿರುವುದು ಎರಡೂ ಸಮಾನ ಮಹಾಪರಾಧಗಳೇ! :-D
http://badari-poems.blogspot.in/