ಮನವರಿತು, ಮನದ ಭಾವನರಿತು,
ಪವಮಾನದಿ ಅವರವರ ನೋವನರಿತು
ಕಡೆಗಾಲವೆಂದಿರದೆ ನಡೆದಾಡಿ ಕೂಡಿ
ಭಾನೆತ್ತರಕೇರಿ ದಿಗಂತದೆತ್ತೆಡೆಗೆ ಜಾರಿ
ಮಿರಮಿರ ಮಿನುಗೋ ಚುಕ್ಕಿಗಳ ಮೀರಿ
ಬೆಳೆಯಿದ್ದು, ಬೆಲೆಕಟ್ಟಲಾಗದೆ ಬೆಲೆಬಾಳುವ
ಶುಭ್ರಸ್ನೇಹಕ್ಕೆಲ್ಲಿದೆ ಹೇಳಿ ಹಗೆತನ ?
ತುಂಬಿರಲು ನಮ್ಮಲ್ಲಿ ಹೊಂದುವ ಅರಿವು
ಬರದು ಎಂದೆಂದೂ ಅಗಲಿಕೆಯ ನೋವು;
ಹೆಣ್ಣಿರಲಿ ಗಂಡಿರಲಿ ಸ್ನೇಹ ಮೂಡುದು ಸತ್ಯ
No comments:
Post a Comment