Tuesday 14 August 2012

(ಅ)ಸ್ವತಂತ್ರ ಭಾರತ




ದೊರಕಿತೆಮಗೆ ಸ್ವಾತಂತ್ರ್ಯ ಹರುಷಕೆ ಪರಿವಿಲ್ಲ
ಹಲವಾರು ವರುಷಗಳ ಹೋರಾಟಕೆ ಗೆಲುವು;
ಸಾವಿರಾರು ಜೀವಗಳ ಬಲಿದಾನಕೆ ಫಲವು !
ಪರರಿಂದ ಹೊರಬಂದು ಹರುಷದಿಂ ಬೀಗಿದೆವು
ದೊರಕಿದೊಡೆ ನಮಗಂದು ದಾಸ್ಯದಿಂ ಮುಕ್ತಿ;
ಅಹಿಂಸೆ, ಸತ್ಯ, ತ್ಯಾಗದೊಳಗೆ ಸೇರಿಸಿ ಯುಕ್ತಿ !
ಕಳೆದು ಹೋದವು ಅರವತ್ತೆಂಟು ಸಂವತ್ಸರ
ಮರುಕಳಿಸುತ್ತಿದೆ ಮತ್ತಿಲ್ಲಿ ಜನರೊಳಗೆ ಮತ್ಸರ;
ನಾನು ನನ್ನದೆನ್ನುವ ಸ್ವಾರ್ಥ ಬೆಳೆದು ಹೆಮ್ಮರ !
ಅಂದು ದಾಸ್ಯತನದ ಬದುಕು, ಇಲ್ಲದೆ ಸ್ವಚಂದತೆ 
ಇಂದೂ ದಾಸರು ನಾವು, ಉಳ್ಳವರ ಗುಲಾಮರು;
ದೋಚಿಕೊಂಡರು ದೇಶ ಸ್ವಾರ್ಥಕೆ ಖದೀಮರು !
ಭಯದ ಗೂಡೊಳಗೆ ನಾವು ನಡೆತಂದು ಜೀವನವ 
ಕಳೆದುಕೊಂಡಂತೆ ದೊರೆತ ಸ್ವಾತಂತ್ರ್ಯದ ಹೊಸಬಾಳು;
ಮರಕಲಿಸಿದಂತೆ ಪೂರ್ವದ ಅಡಿಯಾಳ ಕರಿಬಾಳು!
ಕೆಚ್ಚೆದೆಯ ಕಲಿಗಳೇ ಎಚ್ಚೆತ್ತು ಭ್ರಷ್ಟಚಾರಕೆ ಕಿಚ್ಚಚ್ಚಿ 
ಮುಂದೆ ನಡೆಯುವುದರ ಅರಿತು ಯುಕ್ತ ಹೆಜ್ಜೆಹಾಕಿ ;
ಮತ್ತೊಮ್ಮೆ ಕಳೆದುಕೊಳ್ಳುವ ಮುನ್ನ; ದೇಶದ ಉಳಿವಿಗಾಗಿ !!

No comments:

Post a Comment